ಗಿಡ್ಡ ದಾಸರು: ನಾವು ಬಾಲ್ಯದ ದಿನಗಳಲ್ಲಿ ಈಗಿನ celebrity ಸ್ಥಾನಮಾನ ಪಡೆದಿದ್ದ 'ಗಿಡ್ಡ ದಾಸರು' ಎಂಬ ದಾಸರಿದ್ದರು. ಎತ್ತರ ಕಡಿಮೆ ಇದ್ದ ಕಾರಣ ಗಿಡ್ಡ ದಾಸರು ಎಂಬ ವಿಶೇಷಣದಿಂದಲೆ ಪ್ರಖ್ಯಾತಿಯಾಗಿದ್ದರು. ಸದಾ ಲೋಕ ಸಂಚಾರಿಯಾದ ಇವರು ಮಳಖೇಡದ ಶ್ರೀ ಜಯತೀರ್ಥರ ಆರಾಧನೆ, ಲಿಂಗ್ಸಗೂರಿನ ಶ್ರೀ ವರದೇಂದ್ರರ ಆರಾಧನೆ, ಮಂತ್ರಾಲಯದ ಶ್ರೀ ರಾಘವೇಂದ್ರರ ಆರಾಧನೆ, ಆಹ್ವಾನದ ಮದುವೆ ಮುಂಜಿ ಗಳಿಗೆ ತಪ್ಪದೆ ಹಾಜರ. ಗಿಡ್ಡ ದಾಸರು ಬಂದಾರಂದ್ರ ಆ ಸ್ಥಳ/ಸಮಾರಂಭ ಕಳೆಗುಟ್ಟುತಿತ್ತು. ಬಂದಿಲ್ಲಾಂದರ,,,,ಏನೋ ಕಳಕೊಂಡ ಹಾಗೇ ಅನ್ಸಿತಿತ್ತು.ತಮ್ಮ ಸುಶ್ರಾವ್ಯ ಶಾರಿರದಿಂದ ದಾಸರ ಹಾಡುಗಳನ್ನು ನರ್ತಿಸುತ್ತಲೆ ಹಾಡುವ ಇವರ ಶೈಲಿ ಅನನ್ಯ. ಪುಟ್ಟ ಬಾಲಿಕಿಯರನ್ನು ನನ್ನ ಲಗ್ನಾಗು ಎನ್ನುತ್ತ, ಬಾಲಕರನ್ನು ಕಣ್ಣು ಕಿರಿದು ಮಾಡಿ ಹೆದರಿಸುವ ಪರಿಗೆ ಅಂಜದ ಹುಡಗರೆ ಇದ್ದಿಲ್ಲ. ನಿಶ್ಚಿತ ವರಮಾನದ ಅಭಾವ, ದೈಹಿಕ ಸ್ಥಿತಿಯ ಕಾರಣ ಯಾರೂ ಈ ದಾಸರಿಗೆ ಹೆಣ್ಣು ಕೊಡಲೇ ಇಲ್ಲ. ಇತ್ತೀಚಿನ ಹಲವು ವರ್ಷಗಳಿಂದ ಕಾಣಿಸಿಕೊಂಡಿರದ ಈ ಗಿಡ್ಡ ದಾಸರು, ಬಹುಶಃ ಶ್ರೀ ಹರಿಯ ಪಾದ ಸೇರಿರ ಬಹುದು. ಮರೆಯ ಬೇಕಂದರೂ ಮರೆಯಲಾಗದ ವ್ಯಕ್ತಿತ್ವ ಅವರದ್ದು.
No comments:
Post a Comment