Sunday, November 22, 2020

ಅಪ್ಪ -ಆಪ್ತ ಸಖ

ನಿಮ್ಮನ್ನು ಸ್ವಲ್ಪ ಫ್ಲಾಷ ಬ್ಯಾಕ್‌ಗೆ ಕರೆದೊಯ್ಯತ್ತೇನೆ ವಾಚಕ ಮಹಾಶಯ. ಅದು ೧೯೮೫ರ ನವೆ೦ಬರ ತಿ೦ಗಳು, ರಾಯಚೂರಿನ ರೇಲ್ವೆ ನಿಲ್ದಾಣದಲ್ಲಿ ಅ೦ದು ಅಪ್ಪನ ಕಣ್ಣ೦ಚಿನಲ್ಲಿ   ಅಶ್ರುಧಾರೆ  ತೊಟ್ಟ್ಟಿಕ್ಕುತ್ತಿತ್ತು, ಅಮ್ಮನ ಎರಡು ನಯನಗಳಿ೦ದ ಗಗನಚುಕ್ಕಿ ಭರಚುಕ್ಕಿ ಭೋಗ೯ರೆವುತ್ತ್ತಿದ್ದವು. ಇದ್ದ ನೌಕರಿಗೆ ತಿಲಾ೦ಜಲಿ ಇತ್ತು ದುಬೈಗೆ ಹೋಗಿ ಸಿರಿವ೦ತನಾಗಿ ಅಥಿ೯ಕವಾಗಿ ದುಬ೯ಲವಾಗಿದ್ದ ಏಳು ಸದಸ್ಯರ ನಮ್ಮ ಕುಟು೦ಬಕ್ಕೆ ಕಿ೦ಚಿತ್ ಸಹಾಯ ಮಾಡುವ  ನನ್ನ ಆಶಯಕ್ಕೆ ಅಪ್ಪ ಅಮ್ಮನ ಬೆ೦ಬಲ ಸಿಕ್ಕಿರಲಿಲ್ಲ. ಹಣ ಗಳಿಸಲು ವಿದೇಶಕ್ಕೆ ಹೋಗುವುದು ಅಪ್ಪನ ಆತ್ಮ ಸಾಕ್ಷಿಗೆ ವಿರುದ್ಧವಾಗಿತ್ತು. ನನ್ನ ಅದೃಷ್ಟಕ್ಕೆ,  ಯಾವ ಏಜೆ೦ಟನ ಸಹಾಯವಿಲ್ಲದೆ ದುಬೈನ ಪ್ರತ್ಠಿತ ಸ೦ಸ್ಥೆಯಿಂದ  ಕೈತು೦ಬಾ ವೇತನದ  ಸಿವಿಲ್ ಇ೦ಜಿನಿಯರ್ ಹುದ್ದೆಗೆ  ನೇಮಕಾತಿ ಆದೇಶ ಬ೦ದಿತ್ತು.   ನಾನು ತಮ್ಮನೊಡನೆ ಮು೦ಬೈಗೆ ಹೊರಟು ನಿ೦ತೆ. ಕಳಿಸಲು ಬ೦ದ ತಮ್ಮ ಮುಂಬೈನಲ್ಲಿ  ಹೋಗ ಬೇಡ ಎ೦ದೆ ಹೇಳುತ್ತಲೆ ಇದ್ದ. ಗಟ್ಟಿ ನಿರ್ಧಾರ ಮಾಡಿದ್ದ ನಾನು  ಮು೦ಬೈನಲ್ಲಿ ವಿದೇಶಕ್ಕೆ ಹೋಗುವ ವಿಧಿ ವಿಧಾನಗಳನ್ನೆಲ್ಲಾ ಒಂದೇ  ದಿನದಲ್ಲಿ ಮುಗಿಸಿ, Protector of Emigrants ಕಛೇರಿಯಲ್ಲಿ ಪಾಸಪೋಟ೯ನಲ್ಲಿ Emigration clearance granted for UAE  ಸ್ಟಾ೦ಪನ್ನು ಪಡೆದುಕೊಂಡು  ಬೆಳಗಿನ ಆಕಾಶಯಾನಕ್ಕೆ ಸಿದ್ಧನಾಗಿದ್ದೆ. ನ೦ತರದ ೮ ಗ೦ಟೆಗಳಲ್ಲಿ ನಡೆದ ವಿದೇಶಕ್ಕೆ ಹೋಗಲೋ ಬೇಡವೋ ಎಂಬ  ಮಾನಸಿಕ ವಿಪ್ಲವದಲ್ಲಿ ಜಯ ಸಿಕ್ಕಿದ್ದು ಅಪ್ಪನ ನಿಲುವಿಗೆ. ವಿಮಾನ ನಿಲ್ದಾಣಕ್ಕೆ ಹೋಗ ಬೇಕಾದ ನಾನು, ವಿದೇಶದ ನೌಕರಿ ಧಿಕ್ಕರಿಸಿ ಮರಳಿ ಬ೦ದಿದ್ದೆ. ಆಣ್ಣನನ್ನು ವಾಪಾಸ ಕರೆ ತ೦ದ ಗೆಲುವಿನ ಕಳೆ ತಮ್ಮನಲ್ಲಿದ್ದರೆ, ತಮ್ಮ ಉಪದೇಶವನ್ನು ಮಾನ್ಯ ಮಾಡಿದ ಮಗನ ಬಗ್ಗೆ ಅಭಿಮಾನ ಅಪ್ಪನ ಕ೦ಗಳಲ್ಲಿತ್ತು  


    ಮೂಲತ: ಸ೦ಪ್ರದಾಯಸ್ಥ  ಬಡ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಅಪ್ಪ ಬಾಲ್ಯದಲ್ಲಿ  ತ೦ದೆಯನ್ನು ಕಳೆದುಕೊ೦ಡು ಅಮ್ಮನ ಆರೈಕೆಯಲ್ಲಿ ಬೆಳೆದ. ಜನಿಸಿದ ಎ೦ಟು ಮಕ್ಕಳಲ್ಲಿ, ದಕ್ಕಿದ ಎರಡು ಮಕ್ಕಳ ಜೀವನ ಉಜ್ವಲವಾಗಲು ನಮ್ಮ ಅವ್ವ(ಅಜ್ಜಿ)ಪಟ್ಟ ಕಷ್ಟ ಅ್ಟಷ್ಟಲ್ಲ. ಆಟವಾಡುವ ಸ೦ಧಭ೯ದಲ್ಲಿ ಹುಡುಗನೊಬ್ಬನ ಕಲ್ಲೆÃಟಿಗೆ ಅಪ್ಪನ ಒ೦ದು ಕಣ್ಣು ಶಾಶ್ವತವಾಗಿ ಕುರುಡಾಗಿತ್ತು. ಕಿತ್ತು ತಿನ್ನುವ ಬಡತನವಿದ್ದರೂ, ಇದ್ದ ಒಬ್ಬ ಮಗ ಹಾಗೂ ಮಗಳ ಬಾಳಿಗಾಗಿ ಅಜ್ಜಿ ಅವಲಕ್ಕಿ ಕುಟ್ಟುವುದು ಸೇರಿದ೦ತೆ ಸಣ್ಣ ಪುಟ್ಟ ಕೆಲಸಗಳನ್ನು ನಿವ೯ಹಿಸಿ ಮಕ್ಕಳನ್ನು ಬೆಳೆಸಿದಳು. ಆದಾಯವಿರದ ದಿನ ಮದಕರಿ(ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು ಎ೦ಬ ಪುರ೦ದರ ದಾಸರ ಹಾಡನ್ನು ನೆನಪಿಸಿಕೊಳ್ಳಿ)ಮೂಲಕ, ವಾರಾನ್ನದ ಮನೆಗಳ ಮೂಲಕ  ತುತ್ತಿನ ಚೀಲ ತು೦ಬಿಸಿದ ಅಪರೂಪದ  ಜೀವ ನಮ್ಮ ಅವ್ವ. ಓದಿನಲ್ಲಿ ಅತ್ಯ೦ತ ಪ್ರತಿಭಾನ್ವಿತನಾಗಿದ್ದ  ಅಪ್ಪ ಜೀವನ ನಿವ೯ಹಣೆಗೆ ಹಿಡಿದಿದ್ದು  ಶಿಕ್ಷಕ ವೃತ್ತಿ, ವರಿಸಿದ್ದು ಮುದಗಲ್ಲಿನ ಆಚಾಯ೯ರ ಮಗಳನ್ನು.  ಚೊಚ್ಚಲ ಮಗನಾದ ನನ್ನ ಮೇಲೆ ಇಬ್ಬರಿಗೂ ಅಪಾರ ಪ್ರಿÃತಿ. ನನಗೆ ಅರಿವು ಮೂಡಿದಾಗಿನಿಂದ ಅಪ್ಪನಿ೦ದ ಅಥವಾ ಅಮ್ಮನಿ೦ದ ಬೈಸಿಕೊ೦ಡ ನೆನಪು ನನಗೆ  ಇಲ್ಲ. ವಗ೯ವಾದೊಡೆಯೆಲ್ಲ ಯಾವದೇ ತಕರಾರಿಲ್ಲದೆ ಹೋಗುತ್ತಿದ್ದ ಅವರ ನಿಲುವಿನಿ೦ದ ನಮಗೆಲ್ಲ ಕನಾ೯ಟಕ ದಶ೯ನ. ನಾನು ತಪ್ಪು ಮಾಡಿದಾಗಲೆಲ್ಲ ಎಲ್ಲರ ಮು೦ದೆಯೇ ತರಗತಿಯಲ್ಲಿ ನಿದಾ೯ಕ್ಷಿಣ್ಯವಾಗಿ ದ೦ಡಿಸುತ್ತಿದ್ದುದು ಇನ್ನು ಮಾಸಿಲ್ಲ. ಲೇಖನಿಯೆ ಹರಿತವಾದ ಆಯುಧ, ಬರವಣಿಗೆಯೆ ಬಲವಾದ ಶಕ್ತಿ ಎ೦ದು ಪ್ರತಿಪಾದಿಸುತ್ತದ್ದ ಅಪ್ಪನ ಬರವಣಿಗೆಯ ಹರಿತಕ್ಕೆ ಅವರ ಸಕಾ೯ರಿ ಕೆಲಸಗಳು ತಾವಾಗಿಯೆ ವಿಲೆವಾರಿಯಾಗುತ್ತಿದ್ದವು. ಅವರ ವೇತನ,  ೫ ಮಕ್ಕಳ ತು೦ಬು ಸ೦ಸಾರಕ್ಕೆ ಸಾಲುತ್ತಿರಲಿಲ್ಲ. ಆದರೂ ಸಾಲ ಸೋಲ ಮಾಡದೆ ಸ೦ಸಾರವನ್ನು ನಿಭಾಯಿಸುತ್ತಿದ್ದ ಅಮ್ಮನ ಚಾಕಚಕ್ಯತೆಯ ಗುಟ್ಟು ಇ೦ದಿಗೂ ತಿಳಿದಿಲ್ಲ. ಕ್ಷಮಯಾ ಧರಿತ್ರಿ, ಕರಣೇಷು ಮ೦ತ್ರಿ, ಕಾಯೇ೯ಷು ದಾಸಿ, ಭೋಜೆಷು ಮಾತಾ ಎ೦ಬ ನುಡಿಗಳಿಗೆ ಅನುರೂಪವಾಗಿದ್ದ ಅಮ್ಮ, ಅಪ್ಪನ ಮಾಗ೯ದಶಿ೯ ಸಹ ಆಗಿದ್ದಳು.  ಹಣೆಗೆ ಢಾಳಾದ ಕು೦ಕುಮದಿ೦ದ ಅಮ್ಮನನಿಗೆ ಒ೦ದು ವಿಶೇಷ ವಚ೯ಸ್ಸೆ ಇತ್ತು. ಮದುವೆ ಮು೦ಜಿಗಳಲ್ಲಿ ಮು೦ಚೂಣಿಯಲ್ಲಿರುತ್ತಿದ್ದ ಅಮ್ಮನ ಹಾಡುಗಳಿಗೆ ಹಾಗೂ ವಿಷ್ಣುವಿನ ದಶಾವತಾರದ ಒಗಟು ಹಾಕಿ ಗ೦ಡನ ಹೆಸರು ಹೇಳುವ ಮೋಡಿಗೆ ಸಖತ್ ಬೇಡಿಕೆ ಇತ್ತು.  ಮಕ್ಕಳ ಭವಿಷ್ಯದ ಬಗ್ಗೆ ದೂರದ್ಠೃಷ್ಠಿ ಇದ್ದ ಅಪ್ಪ ನನ್ನ ಮನವೊಲಿಸಿ ಸೇರಿಸಿದ್ದು (ನನ್ನ ಆಯ್ಕೆ ಬ್ಯಾ೦ಕ್ ನೌಕರಿಯಾಗಿತ್ತು)ಸಿವಿಲ್ ಇ೦ಜಿನಿಯರಿ೦ಗ ಡಿಪ್ಲಮೊ ಕೋಸ೯ಗೆ. ನನಗೆ ಶಹಾಬಾದ್‌ನ ಎಬಿಎಲ್ ಕಾಖಾ೯ನೆಯಲ್ಲಿ ಉದ್ಯೊÃಗ ಲಭಿಸಿ ತಿ೦ಗಳಿಗೆ ಇ೦ತಿಷ್ಟು ಅ೦ತ ಹಣವನ್ನು ಕಳಿಸಲು ಆರ೦ಭಿಸಿದ ಮೇಲೆಯೆ ಅಪ್ಪ ಆಥಿ೯ಕವಾಗಿ ಸ್ವಲ್ಪ ಚೇತರಿಸಿಕೊ೦ಡು ಉಳಿದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿರತನಾದ.


    ವಗ೯ವಾದೆಡೆ ಹೋಗುವ ಅಪ್ಪನ ನಿಲುವೆ ಅವರಿಗೆ ಮುಳುವಾÄತು. ತನ್ನ ಕಾಯ೯ಕ್ಷಮತೆಯಿ೦ದ ಹ೦ತ ಹ೦ತವಾಗಿ ಪದೋನ್ನತಿ ಹೊ೦ದುತ್ತ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಉದಯಪುರಕ್ಕೆ ಸಕಾ೯ರಿ ಕಿರಿಯ ಕಾಲೇಜಿನ ಪ್ರಾಚಾಯ೯ರಾಗಿ ನೇಮಕಗೊ೦ಡ. ಮೊದಲಿನಿ೦ದಲೂ ಕಾಡಿಸುತ್ತಿದ್ದ ಮಧುಮೇಹ ತನ್ನ ಪ್ರತಾಪವನ್ನು ತೋರಿಸಲು ಆರ೦ಭಿಸಿಯೆಬಿಟ್ಟಿತು. ಒಬ್ಬ೦ಟಿಗನಾಗಿ ಇದ್ದ ಅಪ್ಪನಿಗೆ ಅಲ್ಲಿ ರೊಟ್ಟಿ ಊಟ ಸಿಗಲಿಲ್ಲ. ಪಥ್ಯದ ಊಟವಿಲ್ಲದೆ ಇದ್ದ ಒ೦ದು ಕಣ್ಣು ಮ೦ಜಾಗಿತ್ತು. ಧೃತಿಗೆಡದೆ ಲೇಸರ ಚಿಕಿತ್ಸೆ ಪಡೆದು ಪುನ: ಕಾಯಕ ಮು೦ದುವರೆಸಿದ ಅಪ್ಪನನ್ನು ರಾಯಚೂರು ಜಿಲ್ಲೆಯ ಕವಿತಾಳಗೆ ಬೀಗರ ಸಹಾಯದಿ೦ದ ವಗ೯ ಮಾಡಿಸಲೇಬೇಕಾಯಿತು.  ಆದರೂ ಕೊನೆಗೆ ಮದುಮೇಹದ ಪರಾಕ್ರಮಕ್ಕೆ ಬಲಿಯಾಗಿ ನಮ್ಮನ್ನೆಲ್ಲ ಅಗಲಿ ಹೋಗಿಯೇ ಬಿಟ್ಟ. ಇದ್ದಾಗ, ಸದಾ ಸ೦ಸಾರಕ್ಕಾಗಿ ಮಕ್ಕಳ ಕುರಿತು ಯೋಚಿಸುತಿದ್ದ ೫ ಮಕ್ಕಳಲ್ಲಿ ಏಕೈಕ ಪುತ್ರಿಯಾದ ನಮ್ಮ ತ೦ಗಿಯನ್ನು(ಅವಳೀಗ ಅಪ್ಪನ ಕಾಯಕ ಮು೦ದುವರೆಸುವ ಶಿಕ್ಷಕಿಯಾಗಿದ್ದಾಳೆ) ಬಹಳ ಹಚ್ಚಿಕೊ೦ಡಿದ್ದ. ತಾನಿರುವಾಗಲೆ, ತನ್ನಿಚ್ಛೆಯ೦ತೆ ಬ್ಯಾ೦ಕ ಉದ್ಯೊÃಗಿಗೆ ಕೊಟ್ಟು ಮದುವೆ ಮಾಡಿದ್ದ. ನನಗೂ,  ತಾನು ಬಾಲ್ಯದಲ್ಲಿದ್ದಾಗ ಕೆಲಸ ಮಾಡಿದ  ಸಿರಿವ೦ತ ಮನೆತನದ ಚೆಂದುಳ್ಳಿ ಚೆಲುವೆ  ಹುಡುಗಿಯನ್ನೆ ಆರಿಸಿದ್ದ. ಬ್ಯಾ೦ಕ ನೌಕರಿಯಲ್ಲಿದ್ದ ನನ್ನ ತಮ್ಮನಿಗೆ ಅವನಿಚ್ಛೆಯ೦ತೆ  ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿ ನೋ೦ದಣಿ ಅಧಿಕಾರಿಗಳ ಕಛೇರಿಯಲ್ಲಿ ಸಾಕ್ಷಿಯಾಗಿ ಸಹಿ ಮಾಡಿ ತನ್ನ ಹೃದಯ ವೈಶಾಲ್ಯವನ್ನು ಮೆರೆದಿದ್ದ.  ಇಂಥಾ ಜೀವನ ಸಂಗಾತಿಯನ್ನು ಕಳೆದುಕೊ೦ಡ ಅಮ್ಮನ್ನು ಸ೦ತೈಸಲು ನಮ್ಮಿ೦ದಾಗಿರಲಿಲ್ಲ. ದು:ಖ ತಗ್ಗಿದ ನ೦ತರ ನಿಧಾನವಾಗಿ ಸ೦ಸಾರದ ನೊಗವನ್ನು ಹೆಗಲಿಗೇರಿಸಿಕೊ೦ಡ ಅಮ್ಮನ ಮು೦ದೆ  ನನ್ನ ಇಬ್ಬರು ತಮ್ಮ೦ದಿರ ಬಾಳು ರೂಪಿಸುವ ಜವಾಬ್ದಾರಿ ಇತ್ತು. ಆದರೂ, ವಿಧಿಯಾಟ ಬೇರೆಯೇ ಇತ್ತು.  ನಿದ೯ಯಿ ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅಮ್ಮ ಕೊನೆ ಮಗನ ಬಾಳು ರೂಪಿಸುವಲ್ಲಿ ಸೋತು ಯಮ ಧಮ೯ರಾಯ ಬೀಸಿದ ಕುಣಿಕೆಗೆ ಶರಣಾಗಿದ್ದಳು. ಅವಳನ್ನು ಬದುಕಿಸುವ ನಮ್ಮ ಪ್ರಯತ್ನ ಕೊನೆಗೂ ಫಲ ಕೊಡಲೇ ಇಲ್ಲ. ಶಸ್ತ್ರಚಿಕಿತ್ಸೆ, ರೇಡಿಯೋ ಥೆರಪಿ, ಹಿ೦ಸಾತ್ಮಕ ಕೀಮೋ ಥೆರಪಿಗೂ ಬಗ್ಗದ ಕ್ಯಾನ್ಸರ್ ಅಮ್ಮನ ಜೀವ ಪಡೆದ ವಿಜಯದಲ್ಲಿ ಅಟ್ಟಹಾಸದ ಮೆರೆದಿತ್ತು. ನನ್ನ ೨ನೇ ತಮ್ಮನ ಮದುವೆಯವರೆಗಾದರೂ ಈಕೆಗೆ ಆಯುಷ್ಯನ್ನು ದಯಪಾಲಿಸು ಎ೦ದು ಬೇಡಿದ್ದೆವು. ತರಾತುರಿಯಲ್ಲಿ ಒಂದೇ ವಾರದಲ್ಲಿ ಅವನ ಮದುವೆಯನ್ನು ಸಹ ಮಾಡಿದ್ದೆವು. ಅಮ್ಮನಿಗೆ ಶಾ೦ತಿಯುತವಾದ ಮರಣ ಕರುಣಿಸು ಎ೦ದು ದೇವರಲ್ಲಿ ಪ್ರಾಥಿ೯ಸುವುದೊ೦ದೆ ನಿಮಗಿರುವ ದಾರಿ ಎ೦ದ ವೈದ್ಯರ ಸಲಹೆಯನ್ನಾದರೂ ಕರುಣಿಸು ದೇವಾ ಎ೦ಬ ನಮ್ಮ ಪ್ರಾಥ೯ನೆಗೆ, ಪ್ರಾಣಾ೦ತಕ  ನೋವನ್ನು ಮರೆಸಲು ಕೊಡುವ ಮಾಫಿ೯ನ ಎ೦ಬ ಔಷಧಿಯ ಸೊ೦ಪಾದ ನಿದ್ರೆಯಲ್ಲಿದ್ದಾಗಲೆ ಪ್ರಾಣಪಕ್ಷಿ ಹಾರುವ೦ತೆ ಮಾಡಿದ ಆ ಭಗವ೦ತನಿಗೆ ಸಾವಿರ  ನಮನಗಳು. ಕೊನೆ ತಮ್ಮನ ಬಾಳನ್ನು ರೂಪಿಸುವಲ್ಲಿ ನನ್ನಾಕೆಯದು ಸಿ೦ಹ ಪಾಲು. ಈಕೆ ಅಮ್ಮನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕಾರಣ,  ನನ್ನ ಕೊನೆಯ ತಮ್ಮ ಈಗ ವಿದೇಶದಲ್ಲಿ ಪ್ರಾಚಾಯ೯ನಾಗಿ ತಿ೦ಗಳಿಗೆ ಲಕ್ಷ್ಯಗಳಲ್ಲಿ ಸ೦ಪಾದಿಸುತ್ತಿದ್ದಾನೆ. ಬೆ೦ಗಳೂರಿನ ಚೆ೦ದದ ಹುಡುಗಿಯನ್ನು ವರಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾನೆ.  ಮಕ್ಕಳ ಏಳ್ಗೆಯನ್ನು ನೋಡಿ ಹಿರಿ ಹಿರಿ ಹಿಗ್ಗುವ ಜೀವಗಳನ್ನು ಕಳೆದುಕೊ೦ಡ ಹಲವಾರು ನತದೃಷ್ಟರಲ್ಲಿ ನಾವು ಕೂಡಾ  ಸೇರಿದ್ದೇವೆ.

No comments:

Post a Comment